ಶನಿವಾರ, ಫೆಬ್ರವರಿ 22, 2020

ಕವಿತೆ | ಮೌನಯುದ್ದ | ವೆಂಕಟೇಶ ಚಾಗಿ

                           


ಮೌನಯುದ್ದ


ಕನಸುಗಳ ಹಸಿ ಹಸಿವಿಗೆ
ಛಲವೇ ಕೂಡಿಟ್ಟ ಆಹಾರ
ಗುರಿಯೊಂದು ಕಣ್ಣ ಸೆಳೆಯುತ್ತಿದೆ
ಅದೇ ಈಗ ಮನಸಿನ ಆಹಾಕಾರ||

ಸೋಲುಗಳು ಹೊಂಚು ಹಾಕಿವೆ
ಛಲವ ಕದ್ದು ಇಂಚಿಂಚು ಭಕ್ಷಿಸಲು
ಮನದೊಳಗೆ ಕಂಪನ ಆತಂಕ
ನಂಬಿಕೆಯ ಸೌಧ ಕೆಡವಲು ||

ಬತ್ತಲಾದ ಬಯಲಿಗೇನು ಗೊತ್ತು
ಕೆಂಪು ರಕ್ತದ ಗತ್ತು ಮತ್ತು
ಯಾರೋ ನೆಟ್ಟ ಮುಳ್ಳು ಕಲ್ಲುಗಳು
ಹೃದಯಕೆ ಎಲ್ಲವೂ ಗೊತ್ತು ||

ಸ್ವಾರ್ಥಗಳು ಮೂಢ ಕಪ್ಪು ಮನಗಳು
ಕತ್ತಲಾಗಿಸಿವೆ ಎತ್ತಲೂ ಸುತ್ತಲೂ
ಕತ್ತಲನ್ನೇ ನುಂಗುವಂತಹ ದಾಹ ಮೋಹ
ದೃಷ್ಟಿ ಮಾತ್ರ ಆ ಗುರಿಯ ಮುತ್ತಲು ||

ಅಗೋ ಅದೊಂದು ಗುರಿ ಹತ್ತಿರ
ಬಾಚಿಕೊಳ್ಳುವಷ್ಟು ಇನ್ನೂ ಹತ್ತಿರ
ಆನಂದಬಾಷ್ಪದ ತಾಕತ್ತು ಕಿಮ್ಮತ್ತು
ನೆತ್ತರ ನೋವಿಗಿಂತ ಎತ್ತರ ಬಲು ಎತ್ತರ..||

=> ವೆಂಕಟೇಶ ಚಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ , ಅಭಿಪ್ರಾಯ, ಸಲಹೆಗಳನ್ನು ನೀಡಿ

ಮಕ್ಕಳ ಕವನ | ಪುಟ್ಟನ ಗಾಡಿ | ವೆಂಕಟೇಶ ಚಾಗಿ

    ***ಪುಟ್ಟನ ಗಾಡಿ*** ( ಮಕ್ಕಳ   ಕವನ ) ಪುಟ್ಟನ ಗಾಡಿ ಹೊರಟಿದೆ ನೋಡಿ ಬುರ್ ಬುರ್ ಗಾಡಿ ಮಾಡಿದೆ ಮೋಡಿ || ಚಾಲಕ ಇವನೆ ಪಯಣಿಗ ಒಬ್ಬನೆ ನಿಲ್ದಾಣ ನಮ್ಮನೆ ಹೊರಟಿತು ಮ...