ಸೋಮವಾರ, ಏಪ್ರಿಲ್ 6, 2026

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಂಗಳೂರು ಶಾಲೆಯಲ್ಲಿ ಪ್ಲೆಕ್ಸ್ ಅಳವಡಿಕೆ ಕಾರ್ಯಕ್ರಮದಲ್ಲಿ ಭಾಗಿ Bagalkot district Badami taluk Mangaluru School program

ದಿನಾಂಕ 05.04.2026 ರಂದು ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಮಂಗಳೂರು ಶಾಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಮೂರು ತರಗತಿ ಕೊಠಡಿಗಳಿಗೆ ಫ್ಲಕ್ಸ್ ಅಳವಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಲಾಯಿತು.




ಗುರುವಾರ, ಮಾರ್ಚ್ 12, 2026

ಆಗಸದೊಂದಿಗೆ ಮಾತು | ಕವಿತೆ | venkatesh chagi | aagasadondige maatu | kavite | venkatesh chagi



 **ಆಗಸದೊಂದಿಗೆ ಮಾತು** 


( ಕವಿತೆ )


ನಾನು ಆಗಾಗ ಕೇಳುತ್ತೇನೆ

ಆಕಾಶಕ್ಕೆ ...

ನೀನೇಕೆ ಇಷ್ಟು ವಿಶಾಲವಾಗಿರುವೆ 

ತುಂಬಿಕೊಳ್ಳಲು ನಿನಗೆ ಎಷ್ಟೋ ಜಾಗವಿದೆ 

ಆದರೂ ನೀನು ಬರಿದೇ ಆಗಿರುವೆ 

ಒಂದು ನೆನಪಿನ ಕುರುವಿಲ್ಲ 

ಒಂದು ದುಃಖದ ಸುಳಿವಿಲ್ಲ 

ಯಾವುದನ್ನು ಉಳಿಸಿಕೊಂಡಿಲ್ಲ 

ನೀನೆಷ್ಟು ನಿರ್ಮಲ ..


ಆಗಾಗ ಮೋಡಗಳು ನಿನ್ನ ತಬ್ಬಿಕೊಂಡರೂ

ಒಂದಿಷ್ಟು ಕಣ್ಣೀರು ಹಾಕಿ 

ಮತ್ತೆ ಕಳುಹಿಸಿ ಕೊಡುವೆ 

ಸಿಟ್ಟಿನಲ್ಲಿ ಗುಡುಗಿದರು ಸಿಡಿಲಿದರೂ 

ಮತ್ತೆ ಮತ್ತೆ ತಂಪಾಗುವೆ 

ಅಲ್ಲಲ್ಲಿ ಕೆಂಪಾಗಿ ನೀಲಿಯಾಗುವೆ 

ಮತ್ತೆ ಮತ್ತೆ ಬರಿದಾಗುವೆ 

ನೀನೆಷ್ಟು ನಿರ್ಮಲ ...



ನೀನು ಮನಸ್ಸು ಮಾಡಿದರೆ 

ಎಲ್ಲವನ್ನು ನೀನೇ ಇಟ್ಟುಕೊಳ್ಳಬಲ್ಲೆ 

ನೀನು ಹೆಣ್ಣೋ ಗಂಡೋ.. 

ಯಾವ ಧರ್ಮವೋ ಯಾವ ಜಾತಿಯೊ 

ಓದಿದ್ದೆಷ್ಟು ಬರೆದಿದ್ದೆಷ್ಟು 

ಗಳಿಸಿದ್ದೆಷ್ಟು ಉಳಿಸಿದ್ದೆಷ್ಟು 

ನಿನ್ನವರಾರು..? ಅಲ್ಲದವರಾರು..?

ಯಾವುದೂ ಇಲ್ಲ.. ಯಾರೂ ಇಲ್ಲ..

ನೀನು ಬಡವನೋ..? ಶ್ರೀಮಂತನೋ..?

ನೀನೆಷ್ಟು ನಿರ್ಮಲ..



ನಿನ್ನ ನೋಡಿದಾಗಲೆಲ್ಲಾ 

ನನ್ನದೇ ನೋವುಗಳು ಕಾಣುತ್ತಿವೆ

ನಾನು ನಕ್ಕಾಗ ನೀನು ನಗುವೆ

ನೀನೊಂದು ಮಾಯೆಯೋ..? ಗೆಳೆಯನೋ..?

ನಾನೇನು ಕೇಳಲಿ ನಿನಗೆ

ನೀನೇನು ಕೊಡುವೆ ನೀನೇ ಖಾಲಿ..

ಎಲ್ಲವನ್ನೂ ಕೊಡುವ ನೀನೇ ಧನಿಕ

ಎಲ್ಲ ಇದ್ದರೂ ನಾನೇ ಬಡವ..

ನಿನ್ನಂತಾಗಲು ಕಲಿಸು 

ಅಷ್ಟೇ...||


✍️ವೆಂಕಟೇಶ ಚಾಗಿ



ಬುಧವಾರ, ಮಾರ್ಚ್ 4, 2026

ಮಕ್ಕಳ ಪಾಠ | ಮಕ್ಕಳ ಕಥೆ | ವೆಂಕಟೇಶ ಚಾಗಿ | makkala kathe | makkala paata | venkatesh chagi

 ಹನಿಗವನಗಳು | ಮಕ್ಕಳ ಕಥಾಕವನ |ಪುಟಾಣಿ ಪ್ರಾಸಗಳು | ಕಥೆಗಳು |ಹಾಸ್ಯ ಲೇಖನಗಳು | ಲೇಖನಗಳು | ಗಜಾಲ್ ಗಳು |ಕವನಗಳು |ಕವಿತೆಗಳು |ಮಕ್ಕಳ ಕಥೆಗಳು | ಮಕ್ಕಳ ಕವನಗಳು


    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ

h

ಮಕ್ಕಳ ಪಾಠ




ಅನೇಕ ವರ್ಷಗಳ ಹಿಂದೆ ಅನಂತಪುರ ಎಂಬ ರಾಜ್ಯದಲ್ಲಿ ಸೂರ್ಯಕುಮಾರ ಎಂಬ ರಾಜ ಆಳ್ವಿಕೆ ನಡೆಸುತ್ತಿದ್ದನು. ರಾಜನು ತುಂಬಾ ಬಲಶಾಲಿಯಾಗಿದ್ದ. ತನ್ನ ರಾಜ್ಯದ ಸುತ್ತಮುತ್ತಲಿನ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ರಾಜರನ್ನು ಸೋಲಿಸಿ ಅವರಿಂದ ಅಪಾರ ಕಪ್ಪು ಕಾಣಿಕೆಗಳನ್ನು ಹೊತ್ತು ತರುತ್ತಿದ್ದ. ಇದರಿಂದಾಗಿ ಅವನ ಖಜಾನೆಯು ಧನಕನಕಾಧಿಗಳಿಂದ ತುಂಬಿಹೋಗಿತ್ತು. ರಾಜನಿಗೆ ರಾಜ್ಯದ ಆಡಳಿತ ಹಾಗೂ ಪ್ರಜೆಗಳ ಸುಖ ದುಃಖಗಳ ಕಡೆಗೆ ಗಮನ ಹರಿಸಲು ಸಮಯವೇ ಸಿಗುತ್ತಿರಲಿಲ್ಲ. 


ಒಮ್ಮೆ ರಾಜನ ಮೇಲೆ ದೂರದ ರಾಜ್ಯದ ರಾಜನೊಬ್ಬ ದಂಡೆತ್ತಿ ಬಂದ . ಅವನ ಅಪಾರ ಸೈನ್ಯದ ಎದುರು ಸೂರ್ಯಕುಮಾರನ ಸೈನ್ಯ ಜರ್ಜರಿತವಾಯಿತು . ಸೈನಿಕರ ಮನೋಸ್ಥೈರ್ಯ ಕುಸಿಯಿತು. ಸೈನಿಕರೆಲ್ಲಾ ಜೀವಭಯದಿಂದ ದಿಕ್ಕಾಪಾಲಾಗಿ ಹೋಡಿದರು. ದಂಡೆತ್ತಿ ಬಂದ ರಾಜ ಅರಮನೆಯಲ್ಲಿದ್ದ ಖಜಾನೆಯನ್ನು ಲೂಟಿ ಮಾಡಿ ಖಜಾನೆಯಲ್ಲಿದ್ದ ಧನಕನಕಾಧಿಗಳನ್ನು ನೂರಾರು ಕುದುರೆಗಳ ಮೇಲೆ ಹೇರಿಕೊಂಡು ತನ್ನ ರಾಜ್ಯದತ್ತ ಮುಖಮಾಡಿದ. ಸೂರ್ಯಕುಮಾರ ಎಲ್ಲವನ್ನೂ ಕಳೆದುಕೊಂಡು ದಂಡೆತ್ತಿ ಬಂದ ರಾಜನಿಂದ ಪಾರಾಗಿ ಮಾರುವೇಷದಿಂದ ದೂರದ ಒಂದು ಗ್ರಾಮದತ್ತ ತೆರಳಿ ಆ ಗ್ರಾಮದ ಊರ ಹೊರಗಿನ ಒಂದು ಆಲದ ಮರವನ್ನು ಏರಿ ಕುಳಿತುಕೊಂಡ. 



ಸ್ವಲ್ಪ ಸಮಯದ ನಂತರ ಆನದ ಮರದ ಕೆಳಗೆ ಆ ಗ್ರಾಮದ ಕೆಲವು ಮಕ್ಕಳು ಬಂದು ಆಟವಾಡತೊಡಗಿದರು. ಮಕ್ಕಳ ಆಟ ತುಂಟಾಟಗಳನ್ನು ಕಂಡು ರಾಜನಿಗೆ ಖಷಿಯಾಯಿತು. ಮಕ್ಕಳೆಲ್ಲಾ ಸೇರಿ ಯುದ್ದದ ಆಟವನ್ನು ಆಡುವ ಯೋಚನೆ ಮಾಡಿದರು. ಮಕ್ಕಳು ತಮ್ಮಲ್ಲಿಯೇ ಎರಡು ಗುಂಪುಗಳನ್ನು ಮಾಡಿ ತಲಾ ಒಂದೊಂದು ಗುಂಪಿಗೆ ಒಬ್ಬ ರಾಜನ ನೇಮಕ ಮಾಡಿದರು. ಒಂದನೇ ಗುಂಪಿನ ನಾಯಕ ದಷ್ಟಪುಷ್ಟನಾಗಿದ್ದ.  ತನ್ನ ಗುಂಪಿನ ಸದಸ್ಯರಿಗೆ ತಾನು ರಾಜನೆಂದೂ ತನಗೆ ಬಹುಪರಾಕ್ ಹೇಳಬೇಕೆಂದು ಆದೇಶಿಸುತ್ತಿದ್ದ. ಎರಡನೇ ಗುಂಪಿನ ನಾಯಕ ಅಷ್ಟೇನು ದಷ್ಟಪುಷ್ಟನಾಗಿ ಇಲ್ಲದಿದ್ದರೂ ತುಂಬಾ ಚಾಣಾಕ್ಷತನಾಗಿದ್ದ. ತನ್ನ ಗುಂಪಿನ ಸದಸ್ಯರೊಂದಿಗೆ ತುಂಬಾ ಆತ್ಮೀಯತೆಯಿಂದ ಆಪ್ತವಾಗಿ ನಡೆದುಕೊಳ್ಳುತ್ತಿದ್ದ. ಇದರಿಂದಾಗಿ ಆ ಗುಂಪಿನ ಸದಸ್ಯರು ಸ್ವಯಂ ಪ್ರೇರಣೆಯಿಂದ ನಾಯಕನಿಗೆ ಜೈ ಜೈ ಎನ್ನುತ್ತಿದ್ದರು.



ಮಕ್ಕಳ ಯುದ್ದವು ಪ್ರಾರಂಭವಾಯಿತು. ಎರಡನೇ ಗುಂಪಿನ ಮಕ್ಕಳು ತಮ್ಮ ನಾಯಕನ ಪ್ರೇರಣೆಯೊಂದಿಗೆ ಒಗ್ಗಟ್ಟಿನಿಂದ ಹೋರಾಡತೊಡಗಿದರು. ಮೊದಲನೇ ಗುಂಪಿನ ನಾಯಕ ತನ್ನ ಗುಂಪಿನ ಸದಸ್ಯರನ್ನು ಹೋರಾಡಲು ಬಿಟ್ಟು ಹಿಂದೆ ಸರಿದು ಯುದ್ದ ಮಾಡಲು ಆದೇಶಿಸುತ್ತಿದ್ದ. ಮೊದಲನೇ ಗುಂಪಿನ ಮಕ್ಕಳು ತಮ್ಮ ನಾಯಕನ ಮೇಲೆ ಒಬ್ಬೊಬ್ಬರಾಗಿ ಬೇಸರಗೊಂಡು ಗುಂಪು ಬಿಟ್ಟು ಹೊರಬರತೊಡಗಿದರು. ನಾಯಕ ಮಾತ್ರ ತನ್ನ ಕಠಿಣ ಮಾತುಗಳಿಂದ ಬೇಜವಾಬ್ದಾರಿಯಿಂದ ಹೋರಾಟ ಮಾಡಲು ಹೇಳುತ್ತಿದ್ದ. ಇದರ ಪರಿಣಾಮವಾಗಿ ಮೊದಲ ಗುಂಪಿನ ನಾಯಕನ ಬಳಿ ಯಾವ ಮಕ್ಕಳೂ ಇಲ್ಲದಾಗಿ ಸೋಲು ಒಪ್ಪಿಕೊಳ್ಳಬೇಕಾಯಿತು. ಎರಡನೇ ಗುಂಪಿನ ಮಕ್ಕಳು ತಾವು ಗೆದ್ದದ್ದಕ್ಕೆ ಸಂಭ್ರಮಿಸಿದರು. ನಾಯಕನನ್ನು ತಮ್ಮ ಹೆಗಲಮೇಲಿರಿಸಿಕೊಂಡು ಮೆರವಣಿಗೆ ಮಾಡಿದರು.



ಮಕ್ಕಳ ಆಟ ಮುಗಿಯಿತು. ಮರದ ಮೇಲೆ ಕುಳಿದಿದ್ದ ರಾಜನಿಗೆ ಮಕ್ಕಳ ಆಟ ಕಂಡು ತುಂಬಾ ಸಂತೋಷವಾಯಿತು. ಮರದಿಂದ ಕೆಳಗೆ ಇಳಿದು ಬಂದು ಗೆದ್ದ ನಾಯಕನಿಗೆ ಅಭಿನಂದಿಸಿ ತನ್ನ ಕೊರಳಲ್ಲಿ ಇದ್ದ ಸರವನ್ನು ಉಡುಗೊರೆಯಾಗಿ ನೀಡಿದ. ನಂತರ ಮಕ್ಕಳನ್ನು ಉದ್ದೇಶಿಸಿ, " ಮಕ್ಕಳೇ, ನೀವು ನನಗೆ ಒಳ್ಳೆಯ ಪಾಠ ಹೇಳಿಕೊಟ್ಟಿರಿ. ನಿಮ್ಮ ಪಾಠ ನನ್ನ ಮುಂದಿನ ದಿನಗಳಿಗೆ ದಾರಿದೀಪವಾಗಲಿದೆ. ನಿಮ್ಮ ನಾಯಕನ ಗುಣಗಳನ್ನು ನಾನೂ ಅಳವಡಿಸಿಕೊಳ್ಳುತ್ತೇನೆ" ಎಂದು ಹೇಳಿ ತನ್ನ ಅರಮನೆಯತ್ತ ತೆರಳಿದ. ಮುಂದಿನ ದಿನಗಳಲ್ಲಿ ಪ್ರಜೆಗಳಿಗೆ , ಸೈನಿಕರಿಗೆ ಉತ್ತಮ ನಾಯಕನಾಗಿ ರಾಜ್ಯಭಾರ ಮಾಡಿ ಹೆಸರುವಾಸಿಯಾದ.




ಇನ್ನಷ್ಟು ಓದಿ




ಸಾಧನೆಯ ಹಾದಿ | ಮಕ್ಕಳ ಕಥೆ | ವೆಂಕಟೇಶ ಚಾಗಿ | sadhaneya hadi | makkala kathe | venkatesh chagi | story

    

    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ



ಸಾಧನೆಯ ಹಾದಿ




ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಷಕ್ಕೆ ಅತೀ ಆಶೆಗೆ ಒಳಗಾಗದೇ ಕಷ್ಟ ಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದನು.  ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಭಿ ಎಂತಲೂ ಮತಿ ಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು ತಪ್ಪದೆ ಮಾಡುತ್ತಿದ್ದನು.


ರಾಮಯ್ಯನಿಗೆ ಒಬ್ಬ ಮಗನಿದ್ದನು. ಅವನ ಹೆಸರು  ಕಮಲಾಕರ ಎಂದು. ಕಮಲಾಕರ ಅಪ್ಪನ ವಿರುದ್ದ ಗುಣಗಳನ್ನು ಹೊಂದಿದ್ದ. ಹೊಲದಲ್ಲಿ ದುಡಿಯುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ತಾನೊಬ್ಬ ದೊಡ್ಡ ವಿದ್ವಾಂಸನಾಗಿ ಮಾಹಾರಾಜರಿಂದ ಸನ್ಮಾನಿತನಾಗಬೇಕು ಎಂಬ ಬಯಕೆ ಅವನಲ್ಲಿ ಮೂಡಿತ್ತು . ಇದಕ್ಕಾಗಿ ರಾಮಯ್ಯನೊಂದಿಗೆ ವಾಗ್ವಾದ ಮಾಡಿ ಶಾಸ್ತ್ರಾಭ್ಯಾಸಗಳಲ್ಲಿ ತೊಡಗುತ್ತಿದ್ದನು. ಕಾಯಕದ ಅರಿವಿಲ್ಲದ ಕಮಲಾಕರ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದನು. ದೊಡ್ಡ ದೊಡ್ಡ ವಿದ್ವಾಂಸರೆದುರು ಸೋತು ಮನೆಗೆ ಬರುತ್ತಿದ್ದನು. ಆದರೂ ತನ್ನ ತಂದೆ ರಾಮಯ್ಯ ನಿಗೆ " ನೋಡುತ್ತಿರು ನಾನು ಒಂದಲ್ಲಾ ಒಂದು ದಿನ ಮಹಾರಾಜರಿಂದ ಸನ್ಮಾನಿತನಾಗುತ್ತೇನೆ. ಅದು ನಿನ್ನಿಂದ ಸಾಧ್ಯವಿಲ್ಲ. ನೀನೋ ಅನಕ್ಷರಸ್ಥ ರೈತ." ಎಂದು ಹೀಯಾಳಿಸುತ್ತಿದ್ದನು. ರಾಮಯ್ಯ,  ಮಗನ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ತನ್ನ ಕಾಯಕದಲ್ಲಿ ಮಗ್ನನಾಗಿರುತ್ತಿದ್ದನು.


ಒಂದು ದಿನ ಮಹಾರಾಜರು ಮಾರುವೇಷದಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುವಾಗ ರಾಮಯ್ಯನ ಹೊಲಗದ್ದೆಯ  ಬಳಿ ಬಂದರು. ಸಮೃದ್ಧ ಫಸಲನ್ನು ಕಂಡು ಮಹಾರಾಜರು ಸಂತುಷ್ಠರಾದರು. ದೂರದಲ್ಲಿ ಕೆಲಸ ಮಾಡುತ್ತಿದ್ದ ರಾಮಯ್ಯನನ್ನು ಕರೆದು  ರಾಮಯ್ಯನ ಕಾಯಕದ ಬಗ್ಗೆ ವಿಚಾರಿಸಿದರು. ರಾಮಯ್ಯನ ಪರಿಶ್ರಮ ಮಹಾರಾಜರನ್ನು ತುಂಬಾ ಸೆಳೆಯಿತು. ಮಾರುವೇಷದಲ್ಲಿದ್ದ ಮಹಾರಾಜರು ರಾಮಯ್ಯನಿಗೆ, " ರಾಮಯ್ಯ , ನಿನ್ನ ಕರ್ತವ್ಯ , ಶ್ರಮ ಕಂಡು ನನಗೆ ತುಂಬಾ ಸಂತಸವಾಗಿದೆ. ನಾಳೆ ಅರಮನೆಗೆ ಬಾ. ನನ್ನ ಮಕ್ಕಳಿಗೂ ನಿನ್ನ ಶ್ರಮದ ಪರಿಚಯ ಮಾಡಿಕೊಡುವಂತೆ" ಎಂದಾಗ ,ರಾಮಯ್ಯ " ಬುದ್ದಿ ನೀವು ಯಾರು ಅಂತ ಅರಮನೆಯಲ್ಲಿ ಕೇಳಲಿ? " ಎಂದಾಗ , ಮಹಾರಾಜ " ಅರಮನೆಯ ಸೇವಕರಿಗೆ ನಾನೊಬ್ಬ ರೈತ . ರೈತರ ಮಹಾಸೇವಕನ್ನು ನೋಡಬೇಕಿದೆ ಎಂದು ಹೇಳಿದರೆ ಸಾಕು ನನ್ನ ಬಳಿ ಕರೆದು ತರುತ್ತಾರೆ" ಎಂದಾಗ ರಾಮಯ್ಯ ಆಗಲಿ ಎಂದು ಒಪ್ಪಿಕೊಂಡ.


  ಮರುದಿನ ರಾಮಯ್ಯ ತಾನು ಮಹಾರಾಜರ ಅರಮನೆಗೆ ಹೋಗಬೇಕು ಎಂದು ಬಗನ ಬಳಿ ಹೇಳಿದಾಗ , ಮಗ ಕಮಲಾಕರ " ಯಾರೋ ನಿನಗೆ ಸುಳ್ಳು ಹೇಳಿರಬೇಕು. ನೀನೊಬ್ಬ ಬಡ ರೈತ ‌. ಅಲ್ಲಿ ನಿನ್ನಿಂದಾಗುವ ಕೆಲಸವಾದರೂ ಏನಿದೆ?" ಎಂದಾಗ ರಾಮಯ್ಯ ಮಗನ ಮಾತನ್ನು ಲೆಕ್ಕಿಸದೇ ನೇರವಾಗಿ ಅರಮನೆಗೆ ಬಂದಾಗ ಭಟರು ರಾಮಯ್ಯನನ್ನು ವಿಚಾರಿಸಿ ರೈತರ ಮಹಾಸೇವಕನಾದ ಮಹಾರಾಜರ ಬಳಿ ಕರೆದುಕೊಂಡು ಬರುತ್ತಾರೆ. ರಾಮಯ್ಯನಿಗೆ ದಿಘ್ರ್ಬಮೆಯಾಗುತ್ತದೆ. ಮಹಾರಾಜರು , ರಾಮಯ್ಯ ನ ಕೃಷಿ ಸಾಧನೆಯನ್ನು ಸಭಿಕರಿಗೆಲ್ಲಾ ತಿಳಿಸುತ್ತಾರೆ. ರಾಮಯ್ಯ ನನ್ನು ಮಹಾರಾಜರು ಸನ್ಮಾನಿಸುತ್ತಾರೆ.  ಇದನ್ನು ಕಂಡ ಕಮಲಾಕರನ ಅಹಂಕಾರವೆಲ್ಲಾ ಕರಗಿಹೋಗಿ ನಾಚಿಕೆಯಿಂದ ತಲೆತಗ್ಗಿಸುತ್ತಾನೆ.ಸಾಧನೆಗೆ ವಿದ್ವಾಂಸನೇ ಆಗಬೇಕೆಂದಿಲ್ಲ. ಒಬ್ಬ ಸಾಮಾನ್ಯ ರೈತನಲ್ಲೂ ಸಾಧನೆಯ ಗುಣವಿದೆ. " ಎಂದಾಗ  ಅಂದಿನಿಂದ ಕಮಲಾಕರನೂ ತಂದೆಯ ಸಾಧನೆಯ ಹಾದಿಯನ್ನು ಹಿಡಿಯುತ್ತಾನೆ.



=> ವೆಂಕಟೇಶ ಚಾಗಿ
                ‌‌‌‌‌‌              👉ಮುಂದಿನ ಕಥೆ

ಭಾನುವಾರ, ಜುಲೈ 28, 2024

ಮಕ್ಕಳ ಕವನ | ಪುಟ್ಟನ ಗಾಡಿ | ವೆಂಕಟೇಶ ಚಾಗಿ


    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ




***ಪುಟ್ಟನ ಗಾಡಿ***

(ಮಕ್ಕಳ ಕವನ)

ಪುಟ್ಟನ ಗಾಡಿ
ಹೊರಟಿದೆ ನೋಡಿ
ಬುರ್ ಬುರ್ ಗಾಡಿ
ಮಾಡಿದೆ ಮೋಡಿ ||

ಚಾಲಕ ಇವನೆ
ಪಯಣಿಗ ಒಬ್ಬನೆ
ನಿಲ್ದಾಣ ನಮ್ಮನೆ
ಹೊರಟಿತು ಮನೆಮನೆ ||

ಧ್ವನಿಯದು ಜೋರು
ನಡುಗಿತು ಸೂರು
ಕಾಗದದ ಚೂರು
ಕಾಸಿನ ಜಾರು ||

ಹುರಿಗಡ್ಲೆ ಚಟಪಟ
ಬಾಯಲಿ ಕಟಕಟ
ಮರೆತನು ಊಟ
ಮಾಡುವ ಟಾಟಾ ||

ಗಡಿಬಿಡಿ ಪುಟ್ಟ
ರಾಜನ ಪಟ್ಟ
ಏರುವ ಬೆಟ್ಟ
ಹೆದರದ ದಿಟ್ಟ ||

=> ವೆಂಕಟೇಶ ಚಾಗಿ


ವೆಂಕಟೇಶ ಚಾಗಿ

ಶನಿವಾರ, ಜುಲೈ 20, 2024

ಮಕ್ಕಳ ಕವನ | ಕಾಮನಬಿಲ್ಲು | ವೆಂಕಟೇಶ ಚಾಗಿ | children's song | kamanabillu | venkatesh chagi

 

    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ


ಕಾಮನಬಿಲ್ಲು


ಏಳು ಬಣ್ಣದ ಕಾಮನಬಿಲ್ಲು
ನೋಡಲು ಎಷ್ಟು ಸುಂದರ
ಸಂಜೆ ಬಾನಿಗೆ ಅಂದಚಂದ
ಭೂಮಿಯೆ ದೇವರ ಮಂದಿರ ||

ತುಂತುರು ಹನಿಗಳ ತಂದಾನ
ದೇವರು ನೀಡಿದ ಅಭಿದಾನ
ಮೋಡದ ನಡುವೆ ರವಿ ಬಂದ
ಕಾಮನಬಿಲ್ಲನು ನೋಡುತ ನಿಂತ ||

ಎಲೆಯ ಮೇಲಿನ ಹನಿಯಲ್ಲಿ
ಕಾಮನಬಿಲ್ಲನು ನಾ ಕಂಡೆ
ಅಮ್ಮನ ಕರೆದು ಬಣ್ಣಗಳೆಣಿಸಿ
ಬೊಗಸೆಯಲ್ಲಿ ಹಿಡಿದುಕೊಂಡೆ ||

ಬಂದರು ಗೆಳೆಯರು ಅಂಗಳಕೆ
ಕಾಮನಬಿಲ್ಲನು ನೋಡಲಿಕೆ
ಕೆಕೆಯ ಹಾಕಿ ಬಂಡೆಯ ಏರಿ
ಜಿಗಿದೆವು ಎಲ್ಲರೂ ಆಕಾಶಕ್ಕೆ ||

ಸೂರ್ಯನು ಈಗ ಮುಳುಗಿದನು
ಅಮ್ಮನ ಮಡಿಲನು ಸೇರಿದನು
ಕಾಮನ ಬಿಲ್ಲದು ಮರೆಯಾಯ್ತು
ನಮ್ಮಯ ಕಣ್ಣಲಿ ಸೆರೆಯಾಯ್ತು ||


=> ವೆಂಕಟೇಶ ಚಾಗಿ




ಮಂಗಳವಾರ, ಜುಲೈ 16, 2024

ಮಕ್ಕಳ ಕವನ | ಹಾರುವ ಹಕ್ಕಿ | ವೆಂಕಟೇಶ ಚಾಗಿ


    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ



***ಹಾರುವ ಹಕ್ಕಿ***

ಕವಿ : ವೆಂಕಟೇಶ ಚಾಗಿ

ಆಗಸದಲ್ಲಿ ಹಾರುತಿರುವ
 ಸುಂದರ ಹಕ್ಕಿಯ ನೋಡಲ್ಲಿ 
ಹಕ್ಕಿ ಜೊತೆಗೆ ಹಾರುತಿರುವ
 ಹಕ್ಕಿಗಳಿಂಡು ನೋಡಲ್ಲಿ ||

ಕವಿ : ವೆಂಕಟೇಶ ಚಾಗಿ

ಒಂದರ ಹಿಂದೆ ಸಾಲಲಿ ಹಾರುತ
ಹೊರಟಿವೆ ಎಲ್ಲೆಡೆ ಕೇಳೋಣ
 ನಮಗೂ ರೆಕ್ಕೆಗಳನು ಕೊಟ್ಟರೆ 
ಈಗಲೇ ಬಾನಿಗೆ ಹಾರೋಣ ||

ಕವಿ : ವೆಂಕಟೇಶ ಚಾಗಿ

ಬಣ್ಣ ಬಣ್ಣದ ಹೂಗಳ ಕಂಡು 
ಸಂತಸದಿಂದ ನಲಿಯೋಣ
ಪುಟ್ಟ ಪುಟ್ಟ ಹಸಿರು ಗಿಡಗಳ
ಹೆಸರನು ಕೂಗಿ ಕರೆಯೋಣ ||

ಕವಿ : ವೆಂಕಟೇಶ ಚಾಗಿ

ಹತ್ತಿರ ಕಂಡರೂ ದೂರದಿ ಇರುವರು
ಬಾನಿನ ಚುಕ್ಕಿ ಚಂದಿರ 
ಎಲ್ಲರ ಜೊತೆಗೆ ಹಾಡುತಿರಲು 
ಭೂಮಿಯು ಸುಂದರ ಮಂದಿರ ||

ಕವಿ : ವೆಂಕಟೇಶ ಚಾಗಿ

ಸಂಜೆಯ ವೇಳೆಗೆ ಹಕ್ಕಿಗಳೆಲ್ಲಾ
ಗೂಡನು ಸೇರಲು ಹೊರಡುವವು
ರಾತ್ರಿಯ ಕನಸಲಿ ಎಲ್ಲವೂ ಬಂದು
ಚಂದದ ಕಥೆಗಳ ಹೇಳುವವು ||


ಸೋಮವಾರ, ಜುಲೈ 15, 2024

ಮಕ್ಕಳ ಕವನ | ಮೊದಲ ಮಳೆ | ವೆಂಕಟೇಶ ಚಾಗಿ


    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ




 *ಮೊದಲ ಮಳೆ**



ಇಳೆಗೆ ಬಂತು ಮೊದಲ ಮಳೆ
ನೆಲಕೆ ತಂತು ಹೊಸತು ಕಳೆ
ಚಿಗುರು ಮೂಡಲೆಂಥ ಮೋಡಿ
ಇಂಥ ಸೊಬಗ ಎಲ್ಲ ನೋಡಿ ||

ಬಳಲಿದಂಥ ಮರಗಳಲ್ಲಿ
ಬಿಸಿಲನುಂಡ ಗೂಡುಗಳಲಿ
ಮತ್ತೆ ಬಂತು ಹೊಸತನ
ಕೇಳ ಬನ್ನಿ ತನತನ ||

ದೇವನೆಂಥ ಮೋಡಿಗಾರ
ಜೀವ ತರುವ ಜಾದುಗಾರ
ಬಾನ ತುಂಬ ಹಕ್ಕಿ ಆಟ
ನರನು ಕಲಿಯಲಾರ ಪಾಠ ||

ಸಾಲು ಸಾಲು ಮರಗಳಲ್ಲಿ
ಪುಟ್ಟ ಪುಟ್ಟ ಹಕ್ಕಿ ಗೂಡುಗಳಲಿ
ದಿನವೂ ಒಂದು ಬೇರೆ ಹಬ್ಬ
ಸೊಬಗ ನೋಡು ಹತ್ತಿ ದಿಬ್ಬ ||

ಜಗವ ಬೆಳಗೊ ದಿನಕರ
ಹರಸಿ ನಗುವ ಶುಭಕರ
ಚುಕ್ಕಿ ತಾರೆ ಚಂದ್ರರೆಲ್ಲ
ಭುವಿಯ ನೋಡ ಬರುವರಲ್ಲ ||

ಇಳೆಗೆ ಮಳೆಯು ಬರುತಲಿರಲಿ
ಜಗಕೆ ಹರುಷ ತರುತಲಿರಲಿ
ಇದುವೆ ಸ್ವರ್ಗ ಮರೆಯದಿರಿ
ಹಸಿರು ಅಳಿಸಿ ಮರುಗದಿರಿ ||


ಗುರುವಾರ, ಜುಲೈ 4, 2024

ಗಜಲ್ | ಸಖಿ | ವೆಂಕಟೇಶ ಚಾಗಿ


    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ




ಗಜಲ್


ನಿನ್ನ ನೆನಪುಗಳ ಅರಮನೆಯಿಂದ ನಾನೆಂದೂ ಹೊರಬರಲಾರೆ ಸಖಿ
ನಿನ್ನ ಮಾತುಗಳ ಮಧುರ ಗುಂಗನ್ನು ನಾನೆಂದೂ ಕಳೆದುಕೊಳ್ಳಲಾರೆ ಸಖಿ

ಕಳೆದು ಹೋದ ದಿನಗಳು ದಿನದಿಂದ ದಿನಕ್ಕೆ ಮತ್ತಷ್ಟು ದೂರವಾಗಬಹುದು
ನಿನ್ನೊಂದಿಗೆ ಕಳೆದ ಕ್ಷಣಗಳ ಸವಿಯ ಮತ್ತೆಂದೂ ಕಾಣಲಾರೆ ಸಖಿ

ನಮ್ಮಿಬ್ಬರ ಪ್ರೀತಿಯ ಆ ಕಾಮನಬಿಲ್ಲು ಮುದಿತನವ ಮುಡಿದಿರಬಹುದು
ಮಡಿವಂತಿಕೆಯ ಸೋಗಿಗೆ ಹೆದರಿ ನಿನ್ನ ಪ್ರೀತಿಯನೆಂದು ಮರೆಯಲಾರೆ ಸಖಿ

ಗಹನವಾಗಿರುವ ಬದುಕಿನೊಳಗೆ ಕತ್ತಲೆಯ ಛಾಯೆ ಆವರಿಸಿರಬಹುದು
ನಿನ್ನ  ಕಣ್ಣ ಬೆಳಕಿನ ಕಾಂತಿಯ ನಾನೆಂದೂ ಹೊರಗೆ ಹರಿಸಲಾರೆ ಸಖಿ

ಮುದುಡುತಿರುವ ಈ ಕವಿಗೆ ನೀನೆಂದಿಗೂ ಸದಾ ಸೂರ್ಯರಶ್ಮಿಯಂತೆ
ನನ್ನ ಉಸಿರು ಇರುವ ತನಕ ನಿನ್ನ ಪ್ರೀತಿಯ ಋಣವ ನಾನೆಂದೂ ತೀರಿಸಲಾರೆ ಸಖಿ 



=> ವೆಂಕಟೇಶ ಚಾಗಿ




ಬುಧವಾರ, ಜುಲೈ 3, 2024

ಗಜಲ್ | ಅಲೆಯ ಮೇಲೆ | ವೆಂಕಟೇಶ ಚಾಗಿ


    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ





 ಗಜಲ್


ಏನು ಮರೆಯಲಿ ನಿನ್ನ ನೆನಪುಗಳ ಅಲೆಯ ಮೇಲೆ 
ಏನು ನುಡಿಯಲಿ ನನ್ನ ಕನಸುಗಳ ಸುಳಿಯ ಮೇಲೆ 

ಮನದ ಅಂಬರದ ಮೇಲೆ ನಿನ್ನ ನಗುವಿನ ಚಿತ್ತಾರ 
ಏನು ಚಿತ್ರಿಸಲಿ ನಿನ್ನ ನಗುವಿನ ಅಂದದ ಮೇಲೆ 

ಕಾಣದೂರಿನಲ್ಲಿ ಈ ಮನಸು ನಿನಗಾಗಿ ಅಲೆಯುತ್ತಿದೆ 
ಏನು ಹುಡುಕಲಿ ನಿನ್ನ ವಿಳಾಸದ ಪತ್ರದ ಮೇಲೆ 

ನಶ್ವರ ಬದುಕಿನೊಳಗೊಂದು ಸುಂದರ ದೀಪ ನೀನು
ಏನು ಬೆಳಗಲಿ ನಿನ್ನ ಕಣ್ಣೋಟದ ಬೆಳಕಿನ ಮೇಲೆ 

ಅಪರೂಪದ ಖಜಾನೆಯು ಈ 'ಕವಿ'ಗೆ ದೊರೆತಿದೆ 
ಏನು ಗಳಿಸಲಿ ನಿನ್ನ ಸೌಂದರ್ಯದ ನಗೆಯ ಮೇಲೆ 



=> ವೆಂಕಟೇಶ ಚಾಗಿ
Comment on WhatsApp : 9611311195)

ಮಂಗಳವಾರ, ಜುಲೈ 2, 2024

ಗಜಲ್ | ಹಾಜರಿ ಇಲ್ಲದೆ | ವೆಂಕಟೇಶ ಚಾಗಿ

  


    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ



**ಗಜಲ್**

ಮಳೆ ಸುರಿಸದೇ ಮೇಘವು ಹಠ ಹಿಡಿದಾಗಿದೆ ನಿನ್ನ ಹಾಜರಿ ಇಲ್ಲದೆ
ಕಾಮನಬಿಲ್ಲಿನ ಬಣ್ಣಗಳು ಬಣ್ಣ ಕಳೆದಾಗಿದೆ ನಿನ್ನ ಹಾಜರಿ ಇಲ್ಲದೆ


ಸೋನೆ ಮಳೆಯು ಮೌನರಾಗ ಹಾಡುವುದನು ಮರೆತು ಮಂಕಾಗಿದೆ
ತಂಗಾಳಿಯಲಿ ನನ್ನ ಬಿಸಿಯುಸಿರು ತಂಪಾಗಿದೆ ನಿನ್ನ ಹಾಜರಿ ಇಲ್ಲದೆ


ಕನಸುಗಳು ತುಂಬಾ ದಿನಗಳ ನಂತರ ರಜೆಯೊಳಗೆ ಮುಳುಗಿವೆ
ನನಸಾಗುವ ಕನಸುಗಳು ಶುಭ ಗಳಿಗೆಯ ಮರೆತಾಗಿದೆ ನಿನ್ನ ಹಾಜರಿ ಇಲ್ಲದೆ


ಹೂವಿನ ಮಕರಂದಕ್ಕಾಗಿ ಬರುವ ಬಡ ದುಂಬಿಗಳಿಗೂ ದಿಗಿಲಾಗಿದೆ
ಪರಿಮಳವು ಕೂಡ ತನ್ನ ಕಂಪು ಕಳೆದುಕೊಂಡಾಗಿದೆ ನಿನ್ನ ಹಾಜರಿ ಇಲ್ಲದೆ 


ಮುತ್ತಿನ ಹೊತ್ತು ಮೆಲ್ಲ ಮೆಲ್ಲನೆ ಜಾರಿ ಮನದನ್ನೆಯನುನು ಅಪ್ಪುತ್ತಿದೆ
ಕವಿಯ ಗುಡಿಸಲರಮನೆಯಲ್ಲೂ ಕತ್ತಲಾಗಿದೆ ನಿನ್ನ ಹಾಜರಿ ಇಲ್ಲದೆ |


=> ವೆಂಕಟೇಶ ಚಾಗಿ



ಸೋಮವಾರ, ಜುಲೈ 1, 2024

ಕವಿತೆ | ಬಾಡಿಗೆ ಮನೆ | ವೆಂಕಟೇಶ ಚಾಗಿ

 


    ಮತ್ತೊಮ್ಮೆ ಭೇಟಿ ನೀಡಲು venkateshachagi.blogspot.com ಎಂದು search ಮಾಡಿ




**ಬಾಡಿಗೆ ಮನೆ**



ದೇವರಿಗೊಂದು ಮನೆ ಕಟ್ಟಲಾಗಿದೆ
ಅದು ಬಾಡಿಗೆ ಮನೆ
ಮನೆಯೊಳಗೋ ಮೌನ ಬರಿಮೌನ
ದೇವರು ಮಾತ್ರ ಪ್ರಸನ್ನ
ಬೆಳಕಿನಲ್ಲಿ ಬೆಳಕು ಮೂಡಿಸಿ
ದೇವರು ನಗುತ್ತಿದ್ದಾನೆ..

ಕೆಲವು ಕಣ್ಣುಗಳು ದೇವರನ್ನು ಕಂಡು
ಕಣ್ಣೀರು ಸುರಿಸುತ್ತಿವೆ
ಮತ್ತೆ ಕೆಲವು ಕಣ್ಣುಗಳು
ದೇವರ ಸೌಂದರ್ಯವನು 
ಕಣ್ಣತುಂಬ ತುಂಬಿಕೊಳ್ಳುತ್ತಿವೆ

ಬಾಡಿಗೆ ಮನೆಯ ತುಂಬಾ
ಆಸೆ ಆಮೀಷಗಳು ತುಂಬಿ ತುಳುಕುತಿವೆ
ದೇವರಿಗಷ್ಟೇ ಅಲ್ಲ
ಉಸಿರಾಡುವ ಕಲ್ಲುಗಳಲ್ಲೂ ಸಹ
ಗೋಡೆಯ ಮೇಲಿನ ಬಡವರು
ನಗುತ್ತಾ ನಗುತ್ತಾ ಅಳುತ್ತಿದ್ದಾರೆ

ಗ್ರಹಣ ಗ್ರಹಗತಿಗಳು
ಕಳ್ಳಕಾಕರೆಂದರೆ ದೇವರಿಗೂ ಭಯ
ನಗ ನಾಣ್ಯಗಳ ವ್ಯಾಮೋಹ
ಮುನಿಸು ಸಂತೃಪ್ತಿಗಳು ಮತ್ತಷ್ಟು
ಬಾಡಿಗೆ ಮನೆಗೊಮದು ದೊಡ್ಡಬೀಗ
ಆದರೂ ದೇವರಿಗೆ ಸಾಂತ್ವಾನ 
ದೇವರು ಎಲ್ಲೆಡೆಯೂ ಇದ್ದಾನೆ

ರೋಗ ರುಜಿನಗಳು
ದೇವರಿಗೂ ಬರಬಹುದು
ದೇವರಿಗೆ ಮಾತ್ರ ಪರಿಶುದ್ಧತೆಯ ಕಾಳಜಿ
ಮೊರೆಯಿಡುವ ಖಾಲಿಕೈಗಳು
ನೂರಾರು ಸಾವಿರಾರು
ದೇವರು ಮಾತ್ರ ಸದಾ ಹಸನ್ಮುಖಿ
ತನ್ನ ಮನೆಗೆ ತಾನೇ ಬಾಡಿಗೆ ಕಟ್ಟುತ..

ದೇವರಿಗೂ ನಿಯಮಗಳ ಬಂಧನ
ಸಂಸಾರದ ತಾಪತ್ರಯಗಳಿಗಿಂತಲೂ
ಬಾಡಿಗೆ ಮನೆಯೊಳಗೆ ಅಧಿಕ
ದೇವರು ಎಲ್ಲವನೂ ಮರೆತಂತಿದೆ
ಇತಿಹಾಸದ ಪುಟಗಳಲ್ಲಿ ಅಮರ
ಮತ್ತೆ ಹೊಸ ಹುಟ್ಟು ಹೊಸ ಹೆಸರು
ಅದೇ ಬಾಡಿಗೆ ಮನೆಯಲ್ಲಿ..



ವೆಂಕಟೇಶ ಚಾಗಿ

ಬುಧವಾರ, ಜೂನ್ 26, 2024

ಕವಿತೆ | ಧರೆಯ ಮೇಲಿನ ನಕ್ಷತ್ರಗಳು | ವೆಂಕಟೇಶ ಚಾಗಿ 2

   



**ಧರೆಯ ಮೇಲಿನ ಆಕಾಶಗಳು**